ಮನಸಿನ್ಯಾಗಿನ ಮಾತು
Tuesday, June 22, 2010
ಬದುಕು ಹಾಗೆ ಮಗ್ಗಲು ಬದಲಿಸಲೆ ಬೇಕು! ಅಲ್ವಾ...
ಅವತ್ತು ನಾನು ಏನಾಗಿದ್ದೆ, ಇವತ್ತು ಎಲ್ಲಿದ್ದೀನಿ ಎಂಬ ಪ್ರಶ್ನೆ ಪ್ರತಿಯೊಬ್ಬರನ್ನು ಒಂದಲ್ಲಾ ಒಂದು ಸಾರಿ ಕಾಡದೆ ಇರದು.ನನ್ನದು ಅದೆ ಕತೆ.ಏನೆನೋ ಆಗಿ ಈಗ ಏನಾಗಿದೆ ಎಂದು ನನ್ನನ್ನು ನಾನು ಅದೆಷ್ಟು ಸಾರಿ ಕೇಳಿಕೊಂಡಿದ್ದೇನೋ ನನಗೆ ಗೊತ್ತಿಲ್ಲ. ಎಷ್ಟೋ ಸಾರಿ ನಾನವತ್ತು ವಿನಾಶದ ಅಂಚಿಗೆ ಹೋಗಿ ನಿಂತಿದ್ದೇನಾ? ಖಂಡಿತಾ ನನಗೆ ಗೊತ್ತಿಲ್ಲ.ಆದರೆ ಈಗಿನಂತೆ ಬದುಕು ಸ್ಪಷ್ಟವಾಗಿ ಹೆಜ್ಜೆ ಹಾಕುತ್ತಿರಲಿಲ್ಲ. ನನ್ನ ವ್ಯಕ್ತಿತ್ವ ತೀರಾ ಮಸುಕಾಗಿತ್ತು. ನನಗೆ ತಿಳಿಯದೆ ನಾನು ತಪ್ಪು ದಾರಿ ಹಿಡಿದಿದ್ದೆ ಎಂಬುದು ಸರಿಯೋ ತಪ್ಪೋ ಗೊತ್ತಿಲ್ಲ.ಆದರೆ ಆ ಕೆಲವು ವಷಗಳನ್ನು ನಾನು ಅದೆಷ್ಟು ವ್ಯಥವಾಗಿ ಕಳೆದೆನಲ್ಲ ಎಂಬ ಕೊರಗು ಇಗಲೂ ನನ್ನನ್ನು ಕೆಲವೊಮ್ಮೆ ಕಾಡಿದ್ದಿದ್ದೆ. ಯಾವ ಗುರಿ ಇರಲಿಲ್ಲ. ಬದುಕಿಗೆ ಒಂದು ನಿಜವಾದ ಅಥ ಕಂಡು ಕೊಳ್ಳುವುದರಲ್ಲಿ ನಾನು ಸಂಪೂಣ ವಿಫಲನಾಗಿದ್ದೆ ಎಂದೆ ಹೇಳಬಹುದು. ಹಾಗೆ ಬದುಕು ಮಗ್ಗಲು ಬದಲಿಸದಿದ್ದರೆ ನಾನು ಈಗಿನ ನಾನಾಗಿರತಿರಲಿಲ್ಲ ಎಂಬುದು ಸಿದ್ಧ. ಖಂಡಿತಾ ಒಂದು ಸಣ್ಣ ಆದರೆ ಗಟ್ಟಿಯಾದ ನಿಧಾರ ನನ್ನ ಇಡೀ ಬದುಕಿನ ದಿಕ್ಕನ್ನೆ ಬದಲಿಸಿ ಹಾಕಿತು ಎಂದರೆ ಈ ಗಲೂ ನನಗೆ ನಂಬಲು ಆಶ್ಚಯ ಏನಿಸುತ್ತದೆ.ನಾನೀಗ ಅಬ್ಬಬ್ಬಾ ಏನ್ನುವಂತಹ ಸಾಧನೆ ಮಾಡಿದ್ದಿನಿ ಎಂದು ಇದನ್ನೆಲ್ಲಾ ಬರೆದು ಕೊಳ್ಳುತ್ತಿಲ್ಲ. ತಿರಾ ವಿಫಲತೆಯೆ ಮೈದುಂಬಿ ಹೋಗಿದ್ದ ನಾನು ಅದನ್ನೆಲ್ಲಾ ಕೊಡವಿ ಕೊಂಡು ಎದ್ದು ಬಂದೆನಲ್ಲಾ ಎಂಬುದೆ ನನ್ನ ಬಗ್ಗೆ ಒಂದಿಷ್ಟು ವಿಶ್ವಾಸ ಮೂಡಿಸುತ್ತದೆ. ಬದುಕೆ ಹಾಗೆ ಏನೋ ಆಯಿತು ಎಂದು ಹತಾಶರಾಗಿದ್ದಾಗ, ನಿಲಿಪ್ತವಾಗಿದ್ದಾಗ ನಮಗೆ ತಿಳಿಯದಂತೆ ಯಶಸ್ಸಿನ ಸಣ್ಣ ಕಿಟಕಿ ಅದೆಲ್ಲೊ ತೆರೆದು ಕೊಂಡಿರುತ್ತದೆ. ಅದನ್ನು ಗಮನಿಸುವ ಜಾಣ್ಮೆ ಮತ್ತು ತಾಳ್ಮೆ ಬೇಕು ಅಷ್ಟೆ!
Sunday, May 2, 2010
ಸಿದ್ದು! ಈ ಸಾವು... ಆಘಾತಕಾರಿ!!!
ಮಿತ್ರ ಸಿದ್ದು ಅಗಲಿ ತಿಂಗಳು ಕಳೆಯುತ್ತಾ ಬಂತು. ಬದುಕಿನುದ್ದಕ್ಕು ಸದಾ ಹಸನ್ಮುಖಿಯಾಗಿ, ಗೆಳೆಯರ ಒಡನಾಟದಲ್ಲಿ ಒಂದು ಮಿಂಚಿನ ಸಂಚಾರವಾಗಿದ್ದ ಸಿದ್ದು ಬಾರದ ಲೋಕಕ್ಕೆ ತಿರುಗಿ ಹೊಗಿದ್ದು ನಿಜಕ್ಕು ಭರಿಸಲಾಗದ ದುಃಖ ನಿಡಿದೆ. ನನ್ನ ಮತ್ತು ಸಿದ್ದು ಪರಿಚಯ ಭಾಗ್ಯನಗರದ ಹೈಸ್ಕೂಲ್ ನಿಂದ ಪ್ರಾರಂಭವಾಗಿದ್ದು. ನಿತ್ಯ ಅವನ ಸೈಕಲ್ ನಲ್ಲಿ ನಾನು ಸ್ಕೂಲ್ ಗೆ ಹೋಗುತ್ತಿದ್ದೆ. ತುಂಬಾ ಆತ್ಮೀಯತೆಯಿಂದ ನನ್ನನ್ನು ತನ್ನೆಡೆಗೆ ಸೆಳೆದುಕೊಂಡಿದ್ದ ಸಿದ್ದು. ತುಂಬಾ ಬೇಗನೆ ಇಬ್ಬರ ಮಧ್ಯ ಸಲುಗೆ ಬೆಲೆದು ಹೋಗಿತ್ತು. ಅವನು ಅದೆಷ್ಟು ಬೇಗ ಜಗಳಕ್ಕೆ ಮೈ ಮೇಲೆ ಏರಿ ಹೋಗುತ್ತಿದ್ದನೋ, ಅಷ್ಟೇ ಬೇಗ ಗೆಳೆತನದ ತೆಕ್ಕೆಗೆ ಸೆಳೆದುಕೊಳ್ಳುವ ಮಾಂತ್ರಿಕತೆ ಅವನಲ್ಲಿತ್ತು. ಸಿದ್ದು ನನಗೆ ತೀರಾ ಆಪ್ತ ಎಂದೇನು ಅಲ್ಲ. ಆದರೆ ಖಂಡಿತ ನನಗೆ ಪ್ರೀತಿಯ ಗೆಳೆಯನಾಗಿದ್ದಾ. ಅವನ ಸಾವಿನ ಖಾಲಿತನ ನಿರಂತರ..."ಸಿದ್ದಾ ಇಲ್ಲೆ ಹ್ಯಾಂಗ ಬಿಂದಾಸ್ ಆಗಿದ್ದಿ, ಅಲ್ಲಿಯು ನಿನ್ನ ಆತ್ಮ ಫುಲ್ ಖುಷ್ ಆಗಿರಲಿ. ನಿನ್ನ ಜಾತ್ರೆ ಮುಗಿತಲೆ ಮಗನ...."
Saturday, May 1, 2010
ಕನಸುಗಳ ಬೆನ್ನು ಹತ್ತಿ....
ಬದುಕಿನ ಪ್ರಾರಂಭ ಕಣ್ಣು ತೆರೆಯುವದರೊಂದಿಗೆ ಆದರೆ ಕನಸು ಕಾಣುವ ಅಭಿಯಾನ ಅಲ್ಲಿಂದಲೇ ಆರಂಭ. ನನಗೆ ಈಗಲು ಈ ಕನಸಿನ ಬಗ್ಗೆ ನೂರೆಂಟು ಕೌತುಕಗಳಿವೆ. ಅದು ಚಿಗುರೊಡೆಯುವ ಬಗೆ, ರೂಪ ಪಡೆಯುವ ಬಗೆ, ಒಂದು ಸೂಪರ್ ಸಿನಿಮಾದ ಸ್ಕ್ರಿನ್ ಪ್ಲೇ ತರಹ ನರೇಟ್ ಆಗುವ ಬಗೆ ಮತ್ತು ಪ್ರತಿ ಸಾರಿಯು ಬಾಲಿವುಡ್ ಗೆ ಬರುವ ಯುವ ನಿದೇಶಕರು ಕ್ರಿಯೇಟಿವ್ ಹೆಸರಲ್ಲಿ ವಿಚಿತ್ರ ಸಿನಿಮಾ ಮಾಡಿ ಗೊಂದಲಮಯವಾಗಿ ತೆರೆ ಎಳೆಯುವ ರೀತಿಯಲ್ಲಿ abrupt ಆಗಿ climax ಕಂಡುಬರುತ್ತದೆ. ಮಾಯಾಮೃಗವೆನ್ನಿ, ಬಿಸುಲುಗುದರೆ ಎನ್ನಿ ಕನಸು ಮಾತ್ರ ಒಂದು ವಿಭಿನ್ನ ಲೋಕಕ್ಕೆ ಸರ್ರನೆ ಎಳೆದೊಯ್ಯುವ ಮಾಂತ್ರಿಕ ಎಂದಷ್ಟೆ ಹೇಳಬಹುದು.
ಎಷ್ಟೋ ಸಾರಿ ಕಾಡುವ ಕನಸುಗಳು ಕೆಲವೊಮ್ಮೆ ವಾಕರಿಕೆ ತರಿಸಿದ್ದು ಉಂಟು. ಹಳೆಯ ಗೆಳಯ/ತಿ ಬಂದು ಬೆಚ್ಚಗಿನ ಅನುಭವ ನೀಡಿದ್ದು, ಯಾವುದೋ ಕಾಣದ ಸ್ಥಳಕ್ಕೆ ಕಾಲಿರಿಸಿದ್ದು, ವಾಸ್ತವದಲ್ಲಿ ಆಗದ್ದು, ಸಾಧಿಸಿ ತೋರಿಸಿದ್ದು ಅಬ್ಬಾ! ಒಂದೇ, ಎರಡೆ ಆದರೆ ಇದಕ್ಕೆ ಉತ್ತರ ಮಾತ್ರ ಅಗೋಚರ. ಹುಡುಕುವ ಯತ್ನ ಜಾರಿ...ಕನಸಿನ ಬಗ್ಗೆ ಯಾರ್ಯಾರು ಏನು ಹೇಳಿದ್ದಾರೋ ನನಗೆ ತಿಳಿದಿಲ್ಲ. ಆದರೆ ನೀವು ಏನು ಹೇಳುತ್ತೀರಿ ಅಂತ ಕಾಯ್ತಾ ಇದ್ದೀನಿ. ಆದರೆ ಕನಸಲ್ಲಿ ಬಂದು ಕಾಡಬೇಡಿ.
ಎಷ್ಟೋ ಸಾರಿ ಕಾಡುವ ಕನಸುಗಳು ಕೆಲವೊಮ್ಮೆ ವಾಕರಿಕೆ ತರಿಸಿದ್ದು ಉಂಟು. ಹಳೆಯ ಗೆಳಯ/ತಿ ಬಂದು ಬೆಚ್ಚಗಿನ ಅನುಭವ ನೀಡಿದ್ದು, ಯಾವುದೋ ಕಾಣದ ಸ್ಥಳಕ್ಕೆ ಕಾಲಿರಿಸಿದ್ದು, ವಾಸ್ತವದಲ್ಲಿ ಆಗದ್ದು, ಸಾಧಿಸಿ ತೋರಿಸಿದ್ದು ಅಬ್ಬಾ! ಒಂದೇ, ಎರಡೆ ಆದರೆ ಇದಕ್ಕೆ ಉತ್ತರ ಮಾತ್ರ ಅಗೋಚರ. ಹುಡುಕುವ ಯತ್ನ ಜಾರಿ...ಕನಸಿನ ಬಗ್ಗೆ ಯಾರ್ಯಾರು ಏನು ಹೇಳಿದ್ದಾರೋ ನನಗೆ ತಿಳಿದಿಲ್ಲ. ಆದರೆ ನೀವು ಏನು ಹೇಳುತ್ತೀರಿ ಅಂತ ಕಾಯ್ತಾ ಇದ್ದೀನಿ. ಆದರೆ ಕನಸಲ್ಲಿ ಬಂದು ಕಾಡಬೇಡಿ.
Friday, April 23, 2010
ಬರಡು ಮನದ ಬಳಲಿಕೆಗಳು
ಇವು ನನ್ನಯದೆ ಸಾಲುಗಳು
ಬೆಂಬಟ್ಟಿ ಬಂದ ಭಾವನೆಯ ಬಿಂಬಗಳು
ವಿಫಲ ಪ್ರೇಮದ ಪಳೆಯುಳಿಕೆಗಳು
ಬಿಡದೆ ಕಾಡುವ ನೋವಿಗೆ ಸಾಕ್ಷಿಗಳು
ಇವು ಕಿಚ್ಚಿನಿಂದ ರೊಚ್ಚಿಗೆದ್ದು ಕೂಗಿದ ಘೋಷಣೆಗಳು
ಅಸಹಾಯಕತೆಯಿಂದ ತಲೆತಗ್ಗಿಸಿದಾಗ ಸಿಕ್ಕ ಅವಮಾನಗಳು
ದಿಕ್ಕೆಟ್ಟು ನಿಂತಾಗ ಹುಟ್ಟಿಕೊಂಡ ಗೊಂದಲಗಳು
ಸಹಿಸದಾದಾಗ ಮೊಳಕೆಯೊಡೆದ ಸಿಟ್ಟಿನ ಪ್ರತಿರೂಪಗಳು
ಇವು ಹಿಡಿ ಪ್ರೀತಿಗಾಗಿ ಹಂಬಲಿಸಿದ ಕೈಗಳು
ತುಸು ಸಂತೋಷಕ್ಕಾಗಿ ಕೇಳಿಕೊಂಡ ಬೇಡಿಕೆಗಳು
ನನ್ನದೆ ಬದುಕಿನ ಛೀದ್ರ ನೋಟಗಳು
ಖಾಲಿ ಬದುಕಿಗೆ ಬರೆದುಕೊಂಡ ಮರಣ ಶಾಸನಗಳು.
- ವಿಶೇನ
ಹೀಗೊಂದು ಪೀಠಿಕೆ
ಬದುಕಿನಡೆಗಿನ ಪ್ರಶ್ನೆಗಳಿಗೆ ಕೊನೆಯೆಂಬುದಿಲ್ಲ.ಹುಡುಕಾಟವೆಂಬುದಿಲ್ಲಿ ನಿರಂತರ....ಮನದ ಮೂಲೆಯಲ್ಲಿ ಧುತ್ತನೆ ಏಳುವ ದ್ವಂದ್ವಗಳಿಗೆ ಉತ್ತರ ಕಂಡುಕೊಳ್ಳುವುದರಲ್ಲಿ ಬದುಕಿನ ಆಮೂಲ್ಯ ಘಳಿಗೆಗಳು ಕೈಜಾರಿ ಹೋಗಿರುತ್ತವೆ. ಇಲ್ಲಿ ಏನಿದ್ದರು ಭಾವ ರೂಪಕ್ಕಿಂತ ಭಾಹ್ಯ ರೂಪಕ್ಕೆ ಪ್ರಾಶಸ್ತ್ಯ. ತೀರಾ ಆಳಕ್ಕಿಳಿದು ಯಾವುದನ್ನು ನೋಡಬಾರದು. ಇಲ್ಲಿ ನಾನು ಬದುಕಿನೆಡೆಗಿನ ಜಿಗುಪ್ಸೆಯಿಂದ ಈ ಸಾಲುಗಳನ್ನು ಬರೆದಿಲ್ಲ. ಒಂದು ಕೌತುಕ ನನ್ನನ್ನು ಈ ಪ್ರಶ್ನೆಗಳು ಹುಟ್ಟುವಂತೆ ಮಾಡಿವೆ. ಇಲ್ಲಿ ಆ ಬೆರಗನ್ನು ಬಿಡಿಸಿಡುವ ಪ್ರಯತ್ನ ಜಾರಿ. ನೀವು ಕೈ ಜೊಡಿಸಿ.............
Subscribe to:
Posts (Atom)